ಉಣ್ಣೆ ವಲಯ ಪುನಃಶ್ಛೇತನ ಯೋಜನೆ

ಉಣ್ಣೆ ನೇಕಾರರಿಗೆ ಹೆಚ್ಚಿನ ಪ್ರೋತ್ಸಾಹನ ಒದಗಿಸಿ ಅವರ ಜೀವನ ಮಟ್ಟವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ 2013-14ನೇ ಸಾಲಿನ ಆಯವ್ಯಯದಲ್ಲಿ ಮೂರು ವರ್ಷಗಳಲ್ಲಿ ಅನುಷ್ಠಾನಗೊಳ್ಳುವ ಹೊಸ ಯೋಜನೆಯಾದ ಉಣ್ಣೆ ವಲಯದ ಅಭಿವೃದ್ದಿ ಯೋಜನೆಗೆ ರೂ.27.00ಕೋಟಿಗಳ ವಿಶೇಷ ಪ್ಯಾಕೇಜ್‍ನ್ನು ಘೋಷಿಸಲಾಗಿರುತ್ತದೆ. ಈ ಯೋಜನೆಯಡಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

  1. ಉಣ್ಣೆ ಕತ್ತರಿಸುವ ಯಂತ್ರ
  2. ಉಣ್ಣೆ ಕತ್ತರಿಸುವ ಟೇಬಲ್ / ಪೀಠೋಪಕರಣ.
  3. ಸುಧಾರಿತ ಕಾರ್ಡಿಂಗ್ ಯಂತ್ರ
  4. ಮೆಡ್ಲೇರಿ ಚರಕ
  5. ಉಣ್ಣೆ ಸಂಗ್ರಹಣ ಉಗ್ರಾಣ
  6. ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆ
  7. ಸಸಾಮಾನ್ಯ ಸೌಲಭ್ಯ ಕೇಂದ್ರ
  8. ಉಣ್ಣೆ ಸಾಗಾಣಿಕೆ ವಾಹನ
  9. ಚಳ್ಳಕೆರೆಯಲ್ಲಿ ಕಂಬಳಿ ಮಾರುಕಟ್ಟೆ ಸಂಕಿರ್ಣ ಸ್ಥಾಪನೆ

ಈ ಯೋಜನೆಯಡಿ 2013-14, 2014-15 ಮತ್ತು 2015-16ನೇ ಸಾಲಿನಲ್ಲಿ ಉಣ್ಣೆ ವಲಯದ ಪುರ್ನಶ್ಛೇತನಕ್ಕಾಗಿ ವಿವಧ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಉಣ್ಣೆ ಕೈಮಗ್ಗ ಸಹಕಾರ ಸಂಘ / ಮಹಾಮಂಡಳಕ್ಕೆ ರೂ.2297.42 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಕಮದೋಡಿನಲ್ಲಿ ಉಣ್ಣೆ ಮಿಲ್ ಸ್ಥಾಪನೆಗಾಗಿ ರೂ.703.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ವಿವಧ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಉಣ್ಣೆ ಕೈಮಗ್ಗ ಸಹಕಾರ ಸಂಘ / ಮಹಾಮಂಡಳಕ್ಕೆ ರೂ.509.13 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ.

ಶೀರ್ಷಿಕೆ ವಿವರಗಳು
ಉಣ್ಣೆಯ ವಲಯದ ಸಾಕ್ಷ್ಯಚಿತ್ರ ಡೌನ್‍ಲೋಡ್